arakshakaratimesmedia.com
ಕ್ರೈಂ ಸುದ್ದಿಗಳು

ಅಕ್ರಮವಾಗಿ ಮಾರಕಾಸ್ತ್ರಗಳನ್ನಿಟ್ಟಿದ್ದ ಇಬ್ಬರು ರೌಡಿಗಳು ಅಂದರ್, ವಾರೆಂಟ್ ಇದ್ದರೂ ಡೋಂಟ್ ಕೇರ್ ಅಂತಿದ್ರು, ಬಿಸಿನೆಸ್ ಮಾಡಲು ಹೋಗಿ ಸಿಕ್ಕಿಬಿದ್ರು

Share News

ಬೆಂಗಳೂರಿನ ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿಗಳು ಬನ್ನೇರುಘಟ್ಟ ರಸ್ತೆಯ ಅಪಾರ್ಟ್‌ಮೆಂಟ್‌ ಒಂದರ ಮೇಲೆ ದಾಳಿ ನಡೆಸಿ, ಹೆಚ್.ಎ.ಎಲ್ ಪೊಲೀಸ್ ಠಾಣೆಯ ರೌಡಿ ಶೀಟರ್‌ನನ್ನು ಬಂಧಿಸಿದ್ದಾರೆ. ಈತನ ಬಳಿ ಪರವಾನಿಗೆ ಇಲ್ಲದ 2 ಪಿಸ್ತೂಲ್‌ಗಳು ಮತ್ತು 3 ಜೀವಂತ ಗುಂಡುಗಳು ಪತ್ತೆಯಾಗಿವೆ. ತನಿಖೆಯ ವೇಳೆ, ಈ ಮಾರಕ ಆಯುಧಗಳನ್ನು ಹೊರರಾಜ್ಯದ ಉದಯಗಿರಿ ಪೊಲೀಸ್ ಠಾಣೆಯ ರೌಡಿ ಶೀಟರ್‌ನಿಂದ ಖರೀದಿಸಿರುವುದಾಗಿ ತಿಳಿದುಬಂದಿದ್ದು, ಆತನನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈತನ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ 4 ವಾರೆಂಟ್‌ಗಳಿದ್ದು, ಕಳೆದ 7 ವರ್ಷಗಳಿಂದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಉದಯಗಿರಿ ಪೊಲೀಸ್ ಠಾಣೆಯ ವ್ಯಾಪ್ತಿಯ ಇನ್ನೊಬ್ಬನ ವಿರುದ್ಧ ಮೈಸೂರಿನಲ್ಲಿ 7 ವಾರೆಂಟ್‌ಗಳಿದ್ದು, ಕಳೆದ 5 ವರ್ಷಗಳಿಂದ ನ್ಯಾಯಾಲಯಕ್ಕೆ ತಪ್ಪಿಸಿಕೊಳ್ಳುತ್ತಿದ್ದನು.

ಈ ಯಶಸ್ವಿ ಕಾರ್ಯಾಚರಣೆಯನ್ನು ಅಪರ ಪೊಲೀಸ್ ಆಯುಕ್ತರಾದ ಶ್ರೀ. ಅಜಯ್ ಹಿಲೋರಿ ಮತ್ತು ಡಿಸಿಪಿ ಶ್ರೀ. ಹರಿಬಾಬು ಬಿ ಎಲ್ ಅವರ ಮಾರ್ಗದರ್ಶನದಲ್ಲಿ ಎಸಿಪಿ ಶ್ರೀ. ಸಿ ಎಸ್ ಆನಂದ್ ಹಾಗೂ ಇನ್ಸ್‌ಪೆಕ್ಟರ್‌ಗಳಾದ ಶ್ರೀ. ಆರ್ ರಮೇಶ್ ಮತ್ತು ಶ್ರೀ. ಸುರೇಶ್ ಪಿ ಅವರ ತಂಡ ನಿರ್ವಹಿಸಿದೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್


Share News

Related posts

ಸಚಿವರ ಔತಣಕೂಟ ಮತ್ತು ಸಂಪುಟ ಪುನರ್ರಚನೆ ಚರ್ಚೆ: ಸಚಿವ ರಾಮಲಿಂಗರೆಡ್ಡಿ ಹೇಳಿಕೆ

Arakshakara Times Media
2 hours ago

ತಮಿಳುನಾಡಿನ ಪ್ರವಾಸಕ್ಕೆ ಮನೆಯವರು, ಕನ್ನ ಹಾಕಲು ಕಿಟಕಿಯೊಳಗೆ ನುಗ್ಗಿದ ಕಿರಾತಕರು, ವಿಶೇಷ ತಂಡ ರಚಿಸಿ ಹಿಡಿದ ಪೊಲೀಸರು

Arakshakara Times Media
3 hours ago

ಕೋರಮಂಗಲದಲ್ಲಿ ಅಣ್ಣ ಹಾಕಿದ ಮನೆಗೆ ಕನ್ನ, ಸಿ.ಇ.ಐ.ಆರ್ ತಂತ್ರಾಂಶದಿಂದ ಸಿಕ್ಕಿದ್ದು ಬರೋಬ್ರಿ 321 ಮೊಬೈಲ್ಸ್, ಇವು ಆಗ್ನೇಯ ವಿಭಾಗದ ರೋಚಕ ಕಾರ್ಯಾಚರಣೆಗಳು

Arakshakara Times Media
3 hours ago
Exit mobile version