Share News

ಬೆಂಗಳೂರು: ಸಮಾಜ ಸೇವೆಯ ಹಂಬಲದಿಂದ ಸಂಚಾರಿ ನಿಯಮ ಪಾಲನೆಗೆ ಶ್ರಮಿಸುತ್ತಿದ್ದ ಟ್ರಾಫಿಕ್ ವಾರ್ಡನ್ ಒಬ್ಬರು ಭೀಕರ ಅಪಘಾತಕ್ಕೆ ತುತ್ತಾಗಿ, ಇಂದು ಚಿಕಿತ್ಸಾ ವೆಚ್ಚ ಭರಿಸಲಾಗದೆ ಆರ್ಥಿಕವಾಗಿ ಹೈರಾಣಾಗಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆಯ ವಿವರ:

ಪೀಣ್ಯದ ಮೈನಿ ಪ್ರಿಸಿಸನ್ ಪ್ರೊಡೆಕ್ಟ್ ಕಂಪನಿಯಲ್ಲಿ ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತಿರುವ ಇವರು, ಬಿಡುವಿನ ಸಮಯದಲ್ಲಿ ಕಳೆದ ಎರಡು ವರ್ಷಗಳಿಂದ ಟ್ರಾಫಿಕ್ ವಾರ್ಡನ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಏಪ್ರಿಲ್ 18, 2025 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯದ ವೇಳೆ ಗೇಟ್ ನಂಬರ್ 16 ಮತ್ತು 17ರ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಅತಿ ವೇಗವಾಗಿ ಬಂದ KA-04-M-3578 ಸಂಖ್ಯೆಯ ಟೆಂಪೋ ಟ್ರಾವೆಲರ್ ಇವರಿಗೆ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಇವರ ಎರಡೂ ಕಾಲುಗಳ ಮೂಳೆಗಳು ಜರ್ಝರಿತಗೊಂಡಿವೆ. ಸಾರ್ವಜನಿಕರು ಹಾಗೂ ಪೊಲೀಸರ ಸಹಾಯದಿಂದ ಮೊದಲು ಬೋರಿಂಗ್ ಆಸ್ಪತ್ರೆಗೆ ಸೇರಿಸಲ್ಪಟ್ಟು, ನಂತರ ಗಂಗಾ ಆಸ್ಪತ್ರೆಯಲ್ಲಿ ಸುದೀರ್ಘ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಚಿಕಿತ್ಸಾ ವೆಚ್ಚ: ಇದುವರೆಗೆ ಸುಮಾರು 7 ರಿಂದ 8 ಲಕ್ಷ ರೂಪಾಯಿಗಳಷ್ಟು ಹಣ ಖರ್ಚಾಗಿದೆ.

ಇನ್ಶೂರೆನ್ಸ್ ಸಮಸ್ಯೆ: ಅಪಘಾತಕ್ಕೆ ಕಾರಣವಾದ ವಾಹನಕ್ಕೆ ಯಾವುದೇ ವಿಮೆ (Insurance) ಇಲ್ಲದ ಕಾರಣ, ಪರಿಹಾರ ಪಡೆಯುವುದು ಸದ್ಯಕ್ಕೆ ಕಾನೂನು ಹೋರಾಟದ ಹಾದಿಯಲ್ಲಿದೆ. ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ.

ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದ ಇವರು 4-5 ತಿಂಗಳು ಕೆಲಸಕ್ಕೆ ಹೋಗಲಾಗದೆ ಮನೆಯಲ್ಲಿದ್ದರು. ಹೆಂಡತಿ ಮತ್ತು ಮಕ್ಕಳ ಜೀವನ ನಿರ್ವಹಣೆ ಹಾಗೂ ಮುಂದಿನ ಚಿಕಿತ್ಸೆಗೆ ಹಣವಿಲ್ಲದೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. “ಆರ್ಥಿಕವಾಗಿ ನಾನು ತುಂಬಾ ಹಿಂದುಳಿದಿದ್ದು, ಜೀವನ ನಡೆಸುವುದು ಕಷ್ಟವಾಗಿದೆ. ದಯವಿಟ್ಟು ಸರ್ಕಾರ ಅಥವಾ ದಾನಿಗಳು ಸಹಾಯ ಹಸ್ತ ಚಾಚಬೇಕು” ಎಂದು ಅವರು ಕಣ್ಣೀರಿಡುತ್ತಾ ವಿನಂತಿಸಿದ್ದಾರೆ.

ಸಮಾಜದ ಸುರಕ್ಷತೆಗಾಗಿ ತನ್ನ ಸಮಯವನ್ನು ಮೀಸಲಿಟ್ಟ ಇಂತಹ ಸೇವಕನ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಇವರ ಮಾಹಿತಿ :- ವಿದ್ಯಾಸಾಗರ್,

ಬೆಂಗಳೂರು ಸಿಟಿ ಪೋಲೀಸ್ ಸಂಚಾರ ವಾರ್ಡ್‌ನ್,

ಟೋಕನ್ ನಂ.1584.

ನಂ.67, ಮಂಜುನಾಥನಗರ, ಬಾಗಲಗುಂಟೆ,

ಬೆಂಗಳೂರು -560073.

ಇವರಿಗೆ ಸಹಾಯ ಮಾಡಲು ಮನಸುಳ್ಳವರು ಇಚ್ಛಿಸುವವರು ಇವರನ್ನು ಸಂಪರ್ಕಿಸಿ. ಇವರ ಬ್ಯಾಂಕ್ ಅಕೌಂಟ್ ನಂಬರ್ ಹಾಗೂ UPI ಐಡಿ ನಂಬರ್ ಹಾಕಿರುತ್ತೇವೆ… VIDYASAGAR

Mob no 8310909298

Ac no 1420101022700

Ifsc CNRB0001420

Branch.Canara bank bommasandra.


Share News